ಎ.ಡಿ.ಬಿ. ಪ್ರಥಮ ದರ್ಜೆ ಮಹಾವಿದ್ಯಾಲಯ, ಹರಪನಹಳ್ಳಿ
ಕನ್ನಡ ಸಂಘ
ಬಿ.ಎ ಪ್ರಥಮ ವರ್ಷದ ಐಚ್ಚಿಕ ಕನ್ನಡ ವಿದ್ಯಾರ್ಥಿಗಳಿಗೆ ದಿನಾಂಕ 22/11/2022 ರಂದು ಶೈಕ್ಷಣಿಕ ಪ್ರವಾಸವನ್ನು ಏರ್ಪಡಿಸಲಾಗಿತ್ತು, ಈ ಪ್ರವಾಸದಲ್ಲಿ ನೀಲಗುಂದ ಗ್ರಾಮಕ್ಕೆ ಬೆಟ್ಟಿನೀಡಿ, ಹೊರಹೊಲಯದಲ್ಲಿರುವ ಚಾಲುಕ್ಯ ವಾಸ್ತು ಶೈಲಿಯ ಭೀಮೇಶ್ವರ ದೇವಸ್ಥಾನವನ್ನು ಅವಲೋಕಿಸಲಾಯಿತು, ನೀಲಗಂದ ಗ್ರಾಮದ ಕೆರೆ ಮುಂಭಾಗದಲ್ಲಿ ಸುಂದರ ಪರಿಸರದಲ್ಲಿ ಭೀಮೇಶ್ವರ ದೇವಸ್ಥಾನ ನಿರ್ಮಿಸಲ್ಪಟ್ಟಿದೆ. ಮುಖಮಂಟಪ, ಸುಖನಾಸಿ, ನವರಂಗ, ಗರ್ಭಗುಡಿ, ಕಂಭಗಳ ವಿನ್ಯಾಸಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು, ದ್ವಾರ ಬಾಗಿಲುಗಳ ಸೂಕ್ಷ್ಮಕುಸುರಿ ಕೆಲಸದ ಕೆತ್ತನೆಯನ್ನು ನೋಡಿ ವಿದ್ಯಾರ್ಥಿಗಳು ಮೂಕವಿಸ್ಮಿತರಾದರು, ದೇವಾಲಯದ ಗೋಪುರ ಸುಂದರವಾಗಿದ್ದು, ಸುಸ್ಥಿತಿಯಲ್ಲಿದೆ. ಗೋಪುರ ದ್ರಾವಿಡಶೈಲಿಯಿಂದ ಕೂಡಿದೆ, ದೇವಾಲಯದ ಭಿತ್ತಿ, ಗೋಪುರದಲ್ಲಿ ಸುಂದರಕೆತ್ತೆನೆಯ ಮೂರ್ತಿಗಳನ್ನು ಅಳಡಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಶಾಸನಗಳಿವೆ. ಶಾಸನಗಳ ಭಾಷೆÀ, ಪ್ರಕಾರ, ಮಹತ್ವ-ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು, ವಿದ್ಯಾರ್ಥಿಗಳಿಗೆ ದೇವಾಲಯ, ಶಾಸನ ಕುರಿತು ಆಸಕ್ತಿ ಬೆಳೆಸುವಲ್ಲಿ ಈ ಪ್ರವಾಸ ಫಲಕಾರಿಯಾಗಲಿದೆ.
ಒಂದು ದಿನದ ಹೊರಸಂಚಾರದಲ್ಲಿ ನೀಲಗುಂದದ ಶ್ರೀ ಮಂಜುನಾಥ ಪಾಟೀಲ್ ಹಾಗೂ ನಾಗರಾಜ ಪಾಟೀಲ ಪ್ರೀತಿಯಿಂದ ಭೋಜನ ವ್ಯವಸ್ಥೆ ಏರ್ಪಡಿಸಿದ್ದರು, ಪ್ರವಾಸದಲ್ಲಿ ಕನ್ನಡ ವಿಭಾದ 34 ವಿದ್ಯಾರ್ಥಿಗಳು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ., ಡಿ.ತಿಪ್ಪೇಸ್ವಾಮಿ ಉಪನ್ಯಾಸಕರಾದ ಡಾ., ಎ.ಎಂ. ರಾಜಶೇಖರಯ್ಯ, ಶ್ರೀಮತಿ ಸ್ವರ್ಣ ಮತ್ತು ಭರತ್ ಹಾಜರಿದ್ದರು.